ಕಟುಕರಾಗದಿರಿ ನೀವು

ಕಟುಕರಾಗದಿರಿ ನೀವು|
ಕನ್ನಡ ತಿಳಿದೂ
ಕನ್ನಡದವರೆದುರು
ಕನ್ನಡ ಮಾತನಾಡದೆ||

ಕನ್ನಡ ತಿಳಿದು ಮಾತನಾಡದವರನು
ಕಠಿಣ ಹೃದಯಿಗಳೆಂದರೆ ತಪ್ಪೇಕೆ?
ಇಂಥವರನು ಹುಡುಕಲು ಕನ್ನಡಿ ಬೇಕೇಕೆ?
ಇವರ ಮೆಚ್ಚಿಸಲು, ಹೊಗಳಲು ನಾ
ಮುನ್ನುಡಿ ಬರಿಯ ಬೇಕೆ?||

ಇರುವುದು ಕನ್ನಡ ನೆಲ
ಕುಡಿಯುವದು ಕನ್ನಡ ಜಲ|
ಬರುವುದು ಭಾಷೆ ಕನ್ನಡ
ನುಡಿಯಲೇಕೆ ಮನಸು ಬಾರದು|
ಜ್ಞಾನಾರ್ಜನೆಗೆ ಕಲಿಯಲಿ ಹತ್ತಾರು ಭಾಷೆ
ಈ ನೆಲದ ಋಣಭಾರಕಾದರೂ
ನಿತ್ಯ ಕನ್ನಡ ಮಾತನಾಡಲೇಕೆ ಚೌಕಾಸಿ||

ಸಲ್ಲದೀ ಬಿಗುಮಾನ
ಸಡಿಲದಿದ್ದರೆ ಅವಮಾನ|
ಇರಲಿ ಸ್ವಾಭಿಮಾನ
ಸ್ವಲ್ಪವಾದರೂ ಅಭಿಮಾನ|
ತಿನ್ನುತಿರುವುದು ಕನ್ನಡದ ಅನ್ನ
ಬಾಯಿದ್ದು ಸ್ಥಳಿಯರೊಡನೆ
ಅನ್ಯಭಾಷೆಯಲಿ ಮತನಾಡಿದರೆ
ಈ ನೆಲಕೆ ನೀ ಕೃತಘ್ನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನಾರ್ಥ ಚಿನ್ಹೆ
Next post ಆತ್ಮದ ಬೆಳಕು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys